ಸೇಡಂ ಗುರು ವಂದನೆಯಲ್ಲಿ ಹಾರಕೂಡ ಶ್ರೀಗಳ ಆಶೀರ್ವಚನ Blessings of Harakuda Shri in Sedam Guru Vandane

Описание к видео ಸೇಡಂ ಗುರು ವಂದನೆಯಲ್ಲಿ ಹಾರಕೂಡ ಶ್ರೀಗಳ ಆಶೀರ್ವಚನ Blessings of Harakuda Shri in Sedam Guru Vandane

ಸೇಡಂ ನಗರದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಹಾರಕೂಡದ ಪರಮಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರಿಗೆ ಗುರುವಂದನೆ ಹಾಗೂ 698ನೇ ತುಲಾಭಾರ ಕಾರ್ಯಕ್ರಮ ಜರುಗಿತು.
ನಗರದ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಜರುಗಿದ ಹಾರಕೂಡ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರ ಗುರುವಂದನೆ ಹಾಗೂ 698ನೇ ತುಲಾಭಾರ ಕಾರ್ಯಕ್ರಮವನ್ನು ವೈದ್ಯಕೀಯ ಸಚಿವ ಸನ್ಮಾನ್ಯ ಶ್ರೀ ಡಾ. ಶರಣಪ್ರಕಾಶ ಪಾಟೀಲ ದೀಪ ಬೆಳಗಿಸಿ ಉದ್ಘಾಟಿಸಿದರು.
ಪೂಜ್ಯ ಶ್ರೀ ಸದಾಶಿವ ಮಹಾ ಸ್ವಾಮಿಗಳು ಸೇಡಂ, ಪಚಾಕ್ಷರಿ ಮಹಾಸ್ವಾಮಿಗಳು ಸೇಡಂ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಜೆಡಿಎಸ್ ಜಿಲ್ಲಾ ಅಧ್ಯಕ್ಷರು ಬಾಲರಾಜ ಗುತ್ತೇದಾರ, ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಗೌಡಪ್ಪನೋರ್, ಸೋಮಣ್ಣ ಪಾಟೀಲ, ನೀಲಕಂಠರಾವ ಪಾಟೀಲ, ಶಿವಶರಣಪ್ಪ ಭಾಂಜಿ, ಮುಂತಾವರುಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಸೇಡಂ ನಗರದ ಭಕ್ತರು ಹಾರಕೂಡ ದಪರಮ ಪೂಜ್ಯರನ್ನು ಅಲಂಕೃತ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಂಡು ಸತ್ಕರಿಸಿ, ತುಲಾಭಾರ ನೆರವೇರಿಸಿ ಆಶೀರ್ವಾದ ಪಡೆದರು.

Комментарии

Информация по комментариям в разработке