Vijay Karnataka Live :ಬೇಲ್‌ ಸಿಕ್ಕರೂ ಮತ್ತೊಂದು ಕೇಸ್‌ನಲ್ಲಿ ಶಾಸಕ ಮುನಿರತ್ನ ಕಗ್ಗಲಿಪುರ ಪೊಲೀಸರಿಂದ ಅರೆಸ್ಟ್.!‌

Описание к видео Vijay Karnataka Live :ಬೇಲ್‌ ಸಿಕ್ಕರೂ ಮತ್ತೊಂದು ಕೇಸ್‌ನಲ್ಲಿ ಶಾಸಕ ಮುನಿರತ್ನ ಕಗ್ಗಲಿಪುರ ಪೊಲೀಸರಿಂದ ಅರೆಸ್ಟ್.!‌

ಜಾತಿ ನಿಂದನೆ, ಕೊಲೆ ಬೆದರಿಕೆ, ಲಂಚ ಬೇಡಿಕೆ ಆರೋಪಗಳ ಅಡಿಯಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕರೂ, ಅವರ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಕಗ್ಗಲೀಪುರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಮಹಿಳೆ, ಒಕ್ಕಲಿಗರ ಹಾಗೂ ಇತರ ಸಮುದಾಯಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಮುನಿರತ್ನ ಆಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದು ವ್ಯಾಪಕ ಟೀಕೆಗೂ ಕಾರಣವಾಗುತ್ತಿದೆ. ಈ ಹಿಂದೆ ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ಎರಡು ಎಫ್‌ಐಆರ್‌ ದಾಖಲಾಗಿತ್ತು, ಆ ದೂರಿನನ್ವಯ ಮುನಿರತ್ನರನ್ನು ಕೋಲಾರದಲ್ಲಿ ಬಂಧನ ಮಾಡಲಾಗಿತ್ತು. ಇ ಎರಡು ಕೇಸ್‌ನಲ್ಲೂ ಕೂಡ ಜಾಮೀನು ಪಡೆದುಕೊಂಡರು. ಆದರೆ ಕಗ್ಗಲಿಪುರ ಪೊಲೀಸ್‌ ಠಾಣೆಯಲ್ಲಿ ಇರ್ವ ಮಹಿಳೆ ದೂರನ್ನು ನೀಡಿದ್ದರು. ಎಫ್‌ಐಆರ್‌ ಕೂಡ ದಾಖಲಾಗಿದ್ದು, ಅತ್ಯಾಚಾರ ಕೇಸ್‌ನಲ್ಲಿ ಮುನಿರತ್ನರನ್ನು ಕಗ್ಗಲಿಪುರ ಪೊಲೀಸ್‌ ಠಾಣೆಯಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ.

Комментарии

Информация по комментариям в разработке