ಮನೆತನಕ್ಕೆ ದಾರಿದ್ರ್ಯಬರಲು ಶಾಪ ಇರುತ್ತೆ ಇಷ್ಟು ಮಾಡಿ ಕಳೆದುಕೊಳ್ಳಿ ಒಂದು ಮುಷ್ಟಿ ಅವಲಕ್ಕಿ ಸುಧಾಮನ ಕಥೆ ಇಷ್ಟೇ

Описание к видео ಮನೆತನಕ್ಕೆ ದಾರಿದ್ರ್ಯಬರಲು ಶಾಪ ಇರುತ್ತೆ ಇಷ್ಟು ಮಾಡಿ ಕಳೆದುಕೊಳ್ಳಿ ಒಂದು ಮುಷ್ಟಿ ಅವಲಕ್ಕಿ ಸುಧಾಮನ ಕಥೆ ಇಷ್ಟೇ

#ಸುಧಾಮನ_ಹಾಡು

ಪತಿಯ ಪಾದಕ್ಕೆರಗಿ ಮತಿ ಬೇಡಿ ಪಾರ್ವತಿ | ಸುತಗೆ

ವಂದನೆಯ ಮಾಡಿದಳು ||

ಅತಿ ಭಕ್ತಿಯಿಂದಲಿ ಸ್ತುತಿಸುವ ಜನರಿಗೆ ಸ- |

ದ್ಗತಿಯಾಗಲೆನುತ ಪೇಳಿದಳು || ೧ ||

ಸುಧಾಮನೆಂಬೋರ್ವ ಸೂಕ್ಷ್ಮದ ಬ್ರಾಹ್ಮಣ |

ಹೊದಿಯಲಿಕ್ಕಿಲ್ಲ ಆಶನವಿಲ್ಲ ||

ಗದಗದ ನಡುಗುತ ಮಧುರ ಮಾತಾಡುತ |

ಸದನದೊಳಿರುತಿದ್ದನಾಗ || ೨ ||

ಪ್ರಾತಃ ಕಾಲದಲ್ಲೆದ್ದು ನಿತ್ಯ ಕರ್ಮವ ಮುಗಿಸಿ | ನಾಥನ

ಧ್ಯಾನ ಮಾಡುತಲಿ ||

ಪಾತ್ರರ ಮನೆಗ್ಹೋಗಿ ಯಾಚನೆಗಳ ಮಾಡಿ | ಗ್ರಾಸ

ತರುವನು ಮುಷ್ಟಿ ತುಂಬ || ೩ ||

ಪತಿವೃತೆ ಹೆಂಡತಿ ಪತಿ ತಂದದ್ದೆ ಸಾಕೆಂದು | ಹಿತದಿಂದ

ಪಾಕ ಮಾಡುವಳು ||

ಅತಿ ಭಕ್ತಿಯಿಂದಲಿ ಪತಿಗೆ ಭೋಜನ ಬಡಿಸಿ | ಮತಿವಂತಿ

ಉಳಿದದ್ದುಂಬುವಳು || ೪ ||

ಹಸಿವೆ ತೃಷೆಗಳಿಂದ ಅತಿಕ್ಲೇಶವಾಗಿದ್ದು | ಪತಿಕೂಡೆ

ಮಾತನಾಡಿದಳು ||

ಗತಿಯೇನು ನಮಗಿನ್ನು ಹಿತದವರ‍್ಯಾರಿಲ್ಲ ಸ- |

ದ್ಗತಿಯೇನೆನುತ ಪೇಳಿದಳು || ೫ ||

ಪೊಡವಿಯೊಳಗೆ ನಿಮ್ಮ ಒಡಹುಟ್ಟಿದವರಿಲ್ಲೆ | ಒಡನೆ

ಆಡಿದ ಗೆಳೆಯರಿಲ್ಲೆ ||

ಕರೆದು ಕೂಡಿಸಿಕೊಂಡು ಬಿರುಸು ಮಾತ್ಹೆಳುವ | ಹಿರಿಯರು

ದಾರಿಲ್ಲೆ ನಿಮಗೆ || ೬ ||

ಚಿಕ್ಕಂದಿಲ್ಲೋದಿಲ್ಲೆ ಹೆತ್ತವರ‍್ಹೆಳಿಲ್ಲೆ | ಉತ್ತಮ ಗುರುಗೋಳಿಲ್ಲೆನು

||

ಹೊತ್ತು ವೇಳೆಗಾಗೋ ಮಿತ್ರರು ಯಾರಿಲ್ಲೆ ಮತ್ತೆ ಕೇಳಿದಳು

ಕ್ಲೇಶದಲಿ || ೭ ||

ಮಡದಿ ಮಾತನು ಕೇಳಿ ಮನದಲಿ ಯೋಚಿಸಿ |

ಹುಡುಗನಾಗಿರಲಿಕ್ಕೆ ಹೋಗಿ ||

ಗುರುಕುಲ ವಾಸದಲಿ ಹರಿ ನಾವು ಓದಿದ್ದು | ಹರಿ ಹೊರ್ತು

ಮತ್ತೊಬ್ಬರಿಲ್ಲಾ || ೮ ||

ಇನ್ನೊಬ್ಬರೇತಕೆ ಅನ್ಯರಪೇಕ್ಷೇಕೆ | ಮನ್ನಿಸಿ ಹೋಗಿ

ಬರ‍್ರೆಂದಳು ||

ಇನ್ನೇನು ಕೊಡತಿಯೆ ಹರಿ ಮುಂದೆ ಇಡಲಿಕ್ಕೆ | ಚೆನ್ನಾಗಿ

ಕೇಳಿದನಾಗ || ೯ ||

ಗಾಬರಿಯಾದಳು ಸಾಗಿ ತಾ ನಡೆದಳು | ಬೇಗ ತಂದಳು

ಅವಲಕ್ಕಿ ||

ಬಾಗಿ ವಸ್ತ್ರದೊಳು ಬೇಗ ಕಟ್ಟಿಕೊಟ್ಟು | ಹೋಗಿ ಬರ‍್ರೆನುತ

ಪೇಳಿದಳು || ೧೦ ||

ಅಂಗಳವನು ಬಿಟ್ಟು ಮುಂದಕೆ ಬಂದನು | ಹಂಗ

ಹಾರುವುದು ಎಡಕೆ ||

ಮಂಗಳವಾಗುವುದು ರಂಗನ ದರುಶನ |

ಸಂದೇಹವಿಲ್ಲದಾಗುವುದು || ೧೧ ||

ಬಾಗಿಲವನು ಬಿಟ್ಟು ಸಾಗಿ ಮುಂದಕೆ ಬರಲು | ಕಾಗಿ

ಹಾರ‍್ಹೋದವು ಬಲಕೆ ||

ಆಗುವುದು ನಮಗಿನ್ನು ಆಗುವುದು ಶುಭ ಚಿನ್ಹ |

ಆಗುವುದು ಹರಿ ಕೃಪೆಯಿಂದ || ೧೨ ||

ಹೀಗೆಂದ ಬ್ರಾಹ್ಮಣ ಮುಂದಕೆ ನಡೆದನು | ಕಂಡನು

ಕಮಲ ಪುಷ್ಪಗಳ ||

ರಂಗನ ಹೆಂಡರಿಗೆ ಹೆರಳಿಗೆ ಬೇಕೆಂದು |

ತೆಗೆದುಕೊಂಡನು ಕಮಲ ಪುಷ್ಪಗಳ || ೧೩ ||

ಹರಿಯುವ ಜಲವೆಲ್ಲ ಹರಿಯಭಿಷೇಕವೆಂ- | ದ್ಹರುಷದಲಿ

ತುಂಬಿಕೊಂಡು ||

ಕರದಲ್ಲಿ ಹಿಡಕೊಂಡು ಪುರದ ಬಾಗಿಲ ಮುಂದೆ | ಹರಿ

ಹ್ಯಾಗೆ ದೊರಕುವ ನೆಂದ || ೧೪ ||

ನಿಂತನು ಬ್ರಾಹ್ಮಣನ ಅನಂತ ರೂಪದಿ ಧ್ಯಾನ | ಅಂತ

ರಂಗದಲಿ ಮಾಡುತಲಿ ||

ಸಂತೋಷದಿಂದಲಿ ಧರಿಸಿದ ದಶರೂಪ- |ದಿಂದ

ಬಂದೆನ್ನ ಕಾಯೆಂದ || ೧೫ ||

ಹರಕು ವಸ್ತ್ರವನುಟ್ಟು ಹರಿ ಧ್ಯಾನ ಮಾಡುವ | ವಿಪ್ರನ

ಕಂಡು ಚಾರಕರು ||

ಬರಬೇಡಿರೊಳಗೆ ಹಿರಿಯರಪ್ಪಣೆಯಿಲ್ಲ | ತಿರುಗಿ ಹೋಗೆನುತ

ಹೇಳಿದರು || ೧೬ ||

ಅಂದ ಮಾತನು ಕೇಳಿ ಅಂಜಿದ ಬ್ರಾಹ್ಮಣ |

ಇಂದಿರಾರಮಣಗ್ಹೇಳೆಂದ ||

ಹೆಸರು ಸುಧಾಮನಂತೆ ಹಸಿದು ಬಂದಾರೆಂದು |

ವಸುದೇವ ತನಯಗ್ಹೇಳಿದರು || ೧೭ ||

ಕೇಳಿದ ಹರಿಯೆದ್ದು ಬಹಳ ಹರುಷದಿಂದ | ಬೇಗನೆ

ಕರೆತನ್ನಿರವನ ||

ಹೋಗು ಹೋಗೆಂದರೆ ಸಾಗಿ ಮುಂದಕೆ ಬರಲು | ಬಾಗಿಲಿಗೆ

ಬಂದ ಸುಧಾಮ || ೧೮ ||

ಬಂದ ಭಕ್ತನ ನೋಡಿ ಆನಂದದಿಂದೆದ್ದು | ವಂದಿಸಿ

ಆಸನವ ಹಾಕಿದರು ||

ಚಂದದಿಂದಲಿ ಕರವ ಹಿಡಿದು ಮಾತಾಡುತ | ಬಂದ

ಕಾರಣವ ಕೇಳಿದರು || ೧೯ ||

ಮಂದಗಮನೆ ಸಹಿತ ತಂದ ಉದಕದಿಂದ |

ಚಂದದಿಂದಲಿ ಪಾದ ತೊಳೆದು ||

ಗಂಧ ಕೇಶರ ಹಚ್ಚಿ ಚೆಂದ ಚಾಮರದಿಂದ | ಅಂದದಿ

ಗಾಳಿ ಬೀಸಿದರು || ೨೦ ||

ಹಸಿದು ಬಂದಾರೆಂದು ಹಸಿವೆಗೆ ತಕ್ಕಂಥ | ಹಸನಾದ

ಹಣ್ಣು ಸಕ್ಕರೆಯು ||

ಕುಸುಮ ನಾಭನು ತಾನು ಪನ್ನೀರು ತಂದೀಡೆ | ಉಂಡು

ಕೈತೊಳೆದ ಸುಧಾಮ || ೨೧ ||

ಮಂದರಧರಗಿನ್ನು ಸುಂದರ ಸತಿಯರು | ತಂದರು ತಬಕ

ವಿಳ್ಯವನು ||

ಇಂದಿರೆರಮಣನು ಬಂದ ಸುಧಾಮನು | ಚಂದದಿ

ಮೆಲೆದರು ವಿಳ್ಯವನು || ೨೨ ||

ಶ್ರಮ ಬಹಳವಾಗಿದೆ ಶ್ರಮಿಸಿಕೊಳ್ಳಿರೆಂದು | ಸೆಳೆ

ಮಂಚ ತಂದ್ಹಾಕಿದರು ||

ಶಾಲು ಸಕಲಾತಿಯು ಮೇಲಾದ ಹಾಸಿಗೆ | ಮೇಲೆ ಮಲಗಿದನು

ಸುಧಾಮ || ೨೩ ||

ಅಂದಿನ ರಾತ್ರಿಯಲಿ ಮಂದಗಮನೇಯರ ಬಿಟ್ಟು | ಬಂದು

ಮಲಗಿದನು ಶ್ರೀಹರಿಯು ||

ಹಿಂದಿನ ವೃತ್ತಾಂತ ಒಂದೊಂದು ಸ್ಮರಿಸುತ | ಆನಂದದಿ

ಹರಿಯು ಸುಧಾಮ || ೨೪ ||

ಅಂದಿನ ಸ್ನೇಹವು ಇಂದೇಕೆ ನೆನಪಾಯ್ತು | ಬಂದೀರಿ

ಬಹುದಿನಕೆಂದ ||

ಹೆಂಡತಿ ಮಕ್ಕಳು ಇಹರೇನು ನಿಮಗೆಂದು | ಇಂದಿರೆ ರಮಣ

ಕೇಳಿದನು || ೨೫ ||

ಹೆಂಡತಿ ಕಳುಹಿದಳು ರಂಗನ ದರುಷನ | ಕೊಂಡು

ಬಾರೆನುತ ಪೇಳಿದಳು ||

ತಂದದ್ದು ಕೊಡಲಿಕ್ಕೆ ಸಂದೇಹವೇತಕ್ಕೆ | ತಂಡುಲ ಹಿಡಿದು

ಜಗ್ಗಿದನು || ೨೬ ||

ಮುಷ್ಟಿತುಂಬವಲಕ್ಕಿ ಮುಕ್ಕಿದ ಹರಿ ಬೇಗ | ನಕ್ಕರು

ಸತಿಯರೆಲ್ಲ ||

ಇಷ್ಟೇ ಸಾಕು ಎಂದು ಗಟ್ಯಾಗಿ ಕೈ ಹಿಡಿಯೆ | ಕೊಟ್ಟನು

ಭಕ್ತನಿಗೆ ಐಶ್ವರ್ಯ || ೨೭ ||

ಹದಿನಾರು ಸಾವಿರ ಚದುರೆಯರ ಕರೆಸಿದ | ಕೊಡಿಸಿದೆಲ್ಲರಿಗೆ

ತಂಡುಲವ ||

ಉಳಿಸಿದ ಅವಲಕ್ಕಿ ಉಣಲಿಕ್ಕೆ ಮಾರ್ಗಕ್ಕೆ | ಬೇಕೆಂದು ಬಿಗಿದು

ಕಟ್ಟಿದರು || ೨೮ ||

ರನ್ನದ ಬಾಗಿಲಿಗೆ ಚಿನ್ನದ ಚೌಕಟ್ಟು | ಹೊನ್ನ

ಹೊಸ್ತಲವ ನಿರ್ಮಿಸಿದ ||

ರನ್ನ ಮಾಣಿಕ ಬಿಗಿದ ತೊಲಿ ಕಂಬ ಗಿಳಿಬೋದು |

ಪನ್ನಗಶಯನ ನಿರ್ಮಿಸಿದ || ೨೯ ||

ಇರಿರಿ ನಾಲ್ಕುದಿವಸ ತ್ವರೆ ಯಾಕೆ ಮಾಡುವಿರಿ | ಇರಲಿಕ್ಕೆ

ಬಾರದೆಯೆಂದಾ ||

ನೆರೆ ಹೊರೆ ಯಾರಿಲ್ಲ ತರುಣಿಯೊಬ್ಬಳಿಹಳು | ಇರಲಿ ನಾ ಹೇಗೆ

ಪೇಳೆಂದ || ೩೦ ||

ಪಾದಕೆ ಎರಗಿ ತಾ ಸಾಗಿ ಮುಂದಕೆ ಬಂದ | ಬಾಗಿಲಿಗೆ

ಬಂದ ಸುಧಾಮ ||

ಹೋಗಿರಿ ಹಿಂದಕೆ ಹೋಗಿ ಬರುತೇನೆನಲು | ಬಾಗಿ ಕೈ ಮುಗಿದ

ಶ್ರೀಹರಿಯು || ೩೧ ||

ಮುಂದಕೆ ಬಂದನು ಇಂದೇನು ಕೊಡಲಿಲ್ಲ | ಹೆಂಡತಿಗೆ

ಹೇಳಲೇನೆಂದ ||

ನಿಂತನು ಒಣಿಯಲಿ ಮಂದಿರ ಸಿಗಲಿಲ್ಲ | ಹೆಂಡತಿಯ ಕಂಡ

ಸುಧಾಮ || ೩೨ ||

ಮಂದಿರವನ್ನೆಲ್ಲ ಕಂಡನು ಐಶ್ವರ್ಯ |

ಚಂದದಿಂದಾಭರಣ ಕಂಡ ||

ಇಂದಿರಾಪತಿಯನ್ನು ಕಂಡು ಬಂದುದರಿಂದ | ಬಂದಿತು

ಸಕಲ ಸಂಪತ್ತು || ೩೩ ||

ರವಿವಾರ ಹಾಡಿದರೆ ರಾಜಕಾರ್ಯವಾಗುವುದು | ಬಂಜೆಗೆ

ಮಕ್ಕಳಾಗುವವು ||

ಬರಡೆಮ್ಮೆ ಕರೆಯೋದು ಬಡತನ ಹಿಂಗುವುದು |

ಗುರುವಾರ ಹಾಡಿದವರಿಗೆ || ೩೪ ||

ಶ್ರೀನಿವಾಸನ ಧ್ಯಾನ ಮೌನದಿಂದಲಿ ಮಾಡಿ | ನಾನಾ

ಸಂಪತ್ತು ಪಡೆದರು ||

ಅದರ ವಿಷಯ ತಿಳಿದು ಗತಿ ಮೋಕ್ಷ ಇರಲೆಂದು | ಶ್ರೀ ಹರಿ

ಕೊಡು ದೇವ ಸಿರಿಯ || ೩೫ ||

ಇದು ಭಾಗವತವೆನ್ನಿ ಇದು ಭಾಗವತವೆನ್ನಿ | ಇದು

ಭಾಗವತಕೆ ಕೀಲಗಳು |

ಇದಕೆ ಪ್ರಿಯನು ನಮ್ಮ ಪುರಂದರವಿಠ್ಠಲ | ಇದರಿಂದ

ಮುಕ್ತಿ ಕೊಡುವನು || ೩೬ ||

Комментарии

Информация по комментариям в разработке