guru vishwaradyara jeevana charitre song... ಗುರು ವಿಶ್ವರಾದ್ಯರ ಜೀವನ ಚರಿತ್ರೆ

Описание к видео guru vishwaradyara jeevana charitre song... ಗುರು ವಿಶ್ವರಾದ್ಯರ ಜೀವನ ಚರಿತ್ರೆ

ಈ ಗ್ರಾಮವು ಶ್ರೀ ವಿಶ್ವರಾಧ್ಯರ ದೇವಾಲಯಕ್ಕೆ ಸುಪ್ರಸಿದ್ಧ . ಇಲ್ಲಿ ಶರಣ ಸಕ್ಕರೆಪ್ಪ ಗೌಡರ ಸಮಾಧಿಯೂ ಇದೆ . ಸಕರೆಪ್ಪ ಗೌಡರ ಸಮಾಧಿಯ ಮೇಲೆ ಶ್ರೀ ವಿಶ್ವರಾಧ್ಯರ ಮೂರ್ತಿಯು ಸ್ಥಾಪಿಸಲಾಗಿದೆ . ಅಬ್ಬೆತುಮಕೂರಿನ ಶ್ರೀ ವಿಶ್ವರಾಧ್ಯ ಸಿದ್ಧ ಸಂಸ್ಥಾನ ಮಠದ ಈಗಿನ ಪೀಠಾಧಿಪತಿಗಳು , ಶ್ರೀ ಶ್ರೀ ಶಟಸ್ಥಲ ಬ್ರಹ್ಮ ಆಚಾರ್ಯ ರತ್ನ ಡಾ || ಗಂಗಾಧರ ಶಿವಾಚಾರ್ಯ ಮಹಾಸ್ವಾಮೀಜಿ . ಶ್ರೀ ವಿಶ್ವರಾಧ್ಯರು ಬನ್ನಯ್ಯ ಶಾಸ್ತ್ರಿಗಳು ಮತ್ತು ನೀಲಮ್ಮಾ ದಂಪತಿಗಳ ಮಗನಾಗಿ ೧೮೮೦ ವಿಕ್ರಮ ಸಂವತ್ಸರ ಚೈತ್ರ ಶುದ್ಧ ತದಿಗೆ ಗುರುಮಠ ಪ್ರಾತಃ ಕಾಲದ ಶುಭಗಳಿಗೆಯಲ್ಲಿ ಜನಿಸಿದರು . ವಿಶ್ವಾರಾಧ್ಯರು ಬೆಳೆಯುತ್ತಾ ರಾಚೋಟ ಎಂಬ ಗುರುವಿನಲ್ಲಿ ವಿದ್ಯೆಯನ್ನು ಕಲಿತರು . “ ಬೆಳೆಯುವ ಸಿರಿ ಮೊಳಕೆಯಲ್ಲಿ ” ಎಂಬಂತೆ ಬಾಲಕನಾಗಿದ್ದಾಗಲೇ ವಿಶ್ವರಾಧ್ಯರು ಅನೇಕ ನೀತಿಗಳನ್ನು ತೋರಿಸುತ್ತಾ ವಿದ್ಯೆಯಲ್ಲಿ ಪಾರಂಪರಾಗ ತೊಡಗಿದ್ದಾರೆ . ಸದ್ಗುರು ವಿಶ್ವಾರಾಧ್ಯರ ಜನ್ಮಸ್ಥಳ ಗುಲ್ಬರ್ಗ ಜಿಲ್ಲೆಯ , ಜೇವರಗಿ ತಾಲೂಕಿನ ಗಂವ್ಹಾರ ಗ್ರಾಮ . ಪ್ರತಿ ವರ್ಷವೂ , ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರಿನ ಶ್ರೀ ವಿಶ್ವರಾಧ್ಯ ಮಠದ ಪೀಠಾಧಿಪತಿ ಡಾ || ಗಂಗಾಧರ ಸ್ವಾಮೀಜಿಗಳ ನೇತೃತ್ವದಲ್ಲಿ ಸಹಸ್ರಾರು ಭಕ್ತರು ಗಂವ್ಹಾರದಿಂದ ಅಬ್ಬೆತುಮಕೂರಿಗೆ ಪಾದಯಾತ್ರೆ ಮಾಡುತ್ತಾರೆ . ಡೊಳ್ಳು ಕುಣಿತ , ಕಂಸಾಳೆ ನೃತ್ಯ , ವೇಷಗಾರರ ಆಟ ಜನರ ಮನವನ್ನು ರಂಜಿಸಿತ್ತವೆ .

Комментарии

Информация по комментариям в разработке