Vijay Karnataka Live : ಚನ್ನಪಟ್ಟಣ ಬೈ ಎಲೆಕ್ಷನ್‌ ಸಿ.ಪಿ. ಯೋಗೇಶ್ಚರ್‌ಗೆ ಸಂಕಷ್ಟ ಟಿಕೆಟ್‌ಗಾಗಿ ಸರ್ಕಸ್‌.!

Описание к видео Vijay Karnataka Live : ಚನ್ನಪಟ್ಟಣ ಬೈ ಎಲೆಕ್ಷನ್‌ ಸಿ.ಪಿ. ಯೋಗೇಶ್ಚರ್‌ಗೆ ಸಂಕಷ್ಟ ಟಿಕೆಟ್‌ಗಾಗಿ ಸರ್ಕಸ್‌.!

ಲೋಕಸಭಾ ಚುನಾವಣೆಯ ಗೆಲುವಿನಿಂದ ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಸಂಸದ ತುಕಾರಾಂರಿಂದ ತೆರವಾಗಿದ್ದ ಸಂಡೂರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರಿಂದ ತೆರವಾಗಿದ್ದ ಶಿಗ್ಗಾಂವಿ ಕ್ಷೇತ್ರ ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿಯಿಂದ ತೆರವಾಗಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ. ಈ ಮೂರು ಕ್ಷೇತ್ರಗಳಲ್ಲಿ ಭಾರೀ ಪೈಪೋಟಿ ಹಾಗೂ ಜಿದ್ದಾಜಿದ್ದಿಗೆ ಕಾರಣವಾಗಿರೋ ಕ್ಷೇತ್ರ ಅಂದರೆ ಅದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ. ಅದ್ರಲ್ಲೂ ಸಾಕಷ್ಟು ಭಾರಿ ಗೆದ್ದು ಬೀಗಿದ್ದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದ ಸಿ.ಪಿ. ಯೋಗೇಶ್ವರ್‌ ಟಿಕೆಟ್‌ಗಾಗಿ ಶತಪ್ರಯತ್ನ ಮಾಡುತ್ತಿದ್ದಾರೆ. ಮೇಲ್ಮನೆಯಿಂದ ಕೆಳಮನೆಗೆ ಬರಲು ಸಾಕಷ್ಟು ಪ್ರಯತ್ನಗಳು ನಡೆಸುತ್ತಿದ್ದಾರೆ. ಆದರೆ ಸಿ.ಪಿ. ಯೋಗೇಶ್ವರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಶತಗತಾಯ ಮೈತ್ರಿ ಪಕ್ಷದಿಂದ ಟಿಕೆಟ್‌ ಪಡೆಯಲು ಒಂದು ಕಡೆ ಪ್ರಯತ್ನ. ಮತ್ತೊಂದು ಕಡೆ ಟಿಕೆಟ್‌ ಸಿಗದೇ ಇದ್ದಲ್ಲಿ ಮುಂದಿನ ಹಾದಿ ಬಗ್ಗೆ ಚರ್ಚೆ ಹೀಗೆ ಹತ್ತು ಹಲವು ಗೊಂದಲದಲ್ಲಿ ಇರೋ ಸಿ.ಪಿವೈಗೆ ಕಾಂಗ್ರೆಸ್‌ನಿಂದಲೂ ಬಾಗಿಲು ಮುಚ್ಚಿದೆ. ಇದು ಸಿಪಿವೈಗೆ ಮತ್ತೊಂದು ಹೊಡೆತ ಬಿದ್ದಾಂತಾಗಿದೆ.

Комментарии

Информация по комментариям в разработке