ಎಲ್ಲವು ಎಲ್ಲರೂ ನಿಮ್ಮ ವಶ ಆಗ್ತಾರೆ ಈ ಕಾಳಿ ಮಂತ್ರ ಜಪಿಸಿ ಸಾಕು|GIRIDHAR BHAT NEW HD VIDEO 2024 |

Описание к видео ಎಲ್ಲವು ಎಲ್ಲರೂ ನಿಮ್ಮ ವಶ ಆಗ್ತಾರೆ ಈ ಕಾಳಿ ಮಂತ್ರ ಜಪಿಸಿ ಸಾಕು|GIRIDHAR BHAT NEW HD VIDEO 2024 |

ದೀಪಾವಳಿ ಹಬ್ಬದಲ್ಲಿ ಉತ್ತರ ಭಾರತದ ಕಡೆ ಮಹಾಕಾಳಿ ಪೂಜೆ ಮಾಡುತ್ತಾರೆ. ಜಗತ್ತಿನ ಶಕ್ತಿ ಮಾತೆ ಎಂದು ಕರೆಯಲ್ಪಡುವ ಮಹಾಕಾಳಿಯನ್ನು ಪೂಜಿಸಿದರೆ ಐಶ್ವರ್ಯ ಪ್ರಾಪ್ತಿಯಾಗುವುದು. ಆದ್ದರಿಂದ ದೀಪಾವಳಿ ಹಬ್ಬದ ಸಮಯದಲ್ಲಿ ಮಹಾಕಾಳಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಮಹಾಕಾಳಿ ಮಂತ್ರ ಪಠಣೆ ಮಾಡುತ್ತಾರೆ
ಮಹಾಕಾಳಿಯನ್ನು ಶಕ್ತಿ ಸ್ವರೂಪಿಣಿ, ದುಷ್ಟರ ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡುವ ತಾಯಿ ಎಂದು ವರ್ಣನೆ ಮಾಡುತ್ತಾರೆ. ಕಾಳಿ ಮಾತೆಯನ್ನು ಭಕ್ತಿಯಿಂದ ಪೂಜಿಸಿದರೆ ಆ ತಾಯಿ ತನ್ನ ಭಕ್ತರನ್ನು ರಕ್ಷಿಸುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ. ಮಹಾಕಾಳಿ ಎಂದಾಗ ನಾಲಗೆಯನ್ನು ಹೊರಚಾಚಿ, ತಲೆಬುರಡೆಗಳನ್ನು ಕೊರಳಿನಲ್ಲಿ ಹಾರವಾಗಿ ಧರಿಸಿದ, ಕೈಗಳಲ್ಲಿ ಆಯುಧಗಳನ್ನು ಹಿಡಿದಿರುವ ಉಗ್ರ ಸ್ವರೂಪಿಣಿ ಮಹಾಕಾಳಿಯ ಚಿತ್ರ ಕಣ್ಮುಂದೆ ಬರುತ್ತದೆ. ಆದರೆ ಈ ತಾಯಿಯನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೋ ಅವರಿಗೆ ಸಂಪತ್ತು ಹಾಗೂ ಯಶಸ್ಸು ದೊರೆಯುತ್ತದೆ

ಮಹಾಕಾಳಿಯನ್ನು ಒಲಿಸಿಕೊಳ್ಳಲು ಕೆಲವು ಮಂತ್ರಗಳಿವೆ. ಈ ಮಂತ್ರಗಳನ್ನು ಜಪಿಸುವುದರಿಂದ ಯಶಸ್ಸು ದೊರೆಯುತ್ತದೆ ಎಂಬುವುದನ್ನು ಕಾಳಿ ಭಕ್ತರು ಅಚಲವಾಗಿ ನಂಬುತ್ತಾರೆ. ಆದರೆ ಈ ಮಂತ್ರವನ್ನು ಹೇಳುವಾಗ ತುಂಬಾ ಎಚ್ಚರಿಕೆವಹಿಸಬೇಕು, ತಪ್ಪಾಗಿ ಉಚ್ಛರಿಸಿದರೆ ಕೆಡಕು ಉಂಟಾಗುವುದು. ಮಹಾಕಾಳಿ ಮಂತ್ರವನ್ನು ಹೇಳುವುದರಿಂದ ನಮ್ಮಲ್ಲಿ ಒಂದು ರೀತಿಯ ಧನಾತ್ಮಕ ಶಕ್ತಿಯ ಅನುಭವ ಉಂಟಾಗುವುದು, ಆತ್ಮವಿಶ್ವಾಸ, ಧೈರ್ಯ ಮೂಡವುದು ಹಾಗೂ ಮನಸ್ಸಿಗೆ ನೆಮ್ಮದಿ ದೊರೆಯುವುದು. ಕಾಳಿ ಮಂತ್ರಗಳಲ್ಲಿ ತುಂಬಾ 'ಓಂ ಕ್ರೀಂ ಕಾಳಿಕಾಯೈ ನಮಃ' ಎಂಬುವುದು ತುಂಬಾ ಪ್ರಭಾವಶಾಲಿಯಾದ ಮಂತ್ರವಾಗಿದೆ. ಈ ಮಂತ್ರದ ಅರ್ಥ ನಾನು ಕಾಳಿಮಾತೆಗೆ ತಲೆ ಬಾಗಿದ್ದೇನೆ ಎಂಬುವುದಾಗಿದೆ. ಈ ಮಂತ್ರವನ್ನು ಬೆಳಗ್ಗೆ ಹಾಗೂ ಸಂಜೆ ಪಠಿಸುವುದರಿಂದ ಯಶಸ್ಸು ದೊರೆಯುವುದು

TV ಕನ್ನಡ ವಾಹಿನಿಯಲ್ಲಿ ಜಾಹೀರಾತುಗಾಗಿ ಸಂಪರ್ಕಿಸಿ 9986964119

Keep watching, keep enjoying!
#tvkannada #kalimantra108times

Комментарии

Информация по комментариям в разработке