Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ತಿರುಕೊಳವಿನಾಚಿಯ ಪ್ರಸಂಗ [ವೈಹಾಳಿಯ ಪ್ರಸಂಗ] - ಷಡಕ್ಷರ ದೇವ॥ ರಾಜಶೇಖರ ವಿಳಾಸ ॥Shadakshradeva

  • Venkatesh Kannada Class
  • 2024-12-07
  • 8525
ತಿರುಕೊಳವಿನಾಚಿಯ ಪ್ರಸಂಗ [ವೈಹಾಳಿಯ ಪ್ರಸಂಗ] - ಷಡಕ್ಷರ ದೇವ॥ ರಾಜಶೇಖರ ವಿಳಾಸ ॥Shadakshradeva
  • ok logo

Скачать ತಿರುಕೊಳವಿನಾಚಿಯ ಪ್ರಸಂಗ [ವೈಹಾಳಿಯ ಪ್ರಸಂಗ] - ಷಡಕ್ಷರ ದೇವ॥ ರಾಜಶೇಖರ ವಿಳಾಸ ॥Shadakshradeva бесплатно в качестве 4к (2к / 1080p)

У нас вы можете скачать бесплатно ತಿರುಕೊಳವಿನಾಚಿಯ ಪ್ರಸಂಗ [ವೈಹಾಳಿಯ ಪ್ರಸಂಗ] - ಷಡಕ್ಷರ ದೇವ॥ ರಾಜಶೇಖರ ವಿಳಾಸ ॥Shadakshradeva или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ತಿರುಕೊಳವಿನಾಚಿಯ ಪ್ರಸಂಗ [ವೈಹಾಳಿಯ ಪ್ರಸಂಗ] - ಷಡಕ್ಷರ ದೇವ॥ ರಾಜಶೇಖರ ವಿಳಾಸ ॥Shadakshradeva бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ತಿರುಕೊಳವಿನಾಚಿಯ ಪ್ರಸಂಗ [ವೈಹಾಳಿಯ ಪ್ರಸಂಗ] - ಷಡಕ್ಷರ ದೇವ॥ ರಾಜಶೇಖರ ವಿಳಾಸ ॥Shadakshradeva

ಕನ್ನಡ ಅರಿವು-೧, ವೈಹಾಳಿಯ ಪ್ರಸಂಗ ಕಾವ್ಯಭಾಗದ ಸಾರಾಂಶ:-

ಕನ್ನಡ ಸಾಹಿತ್ಯ ಚರಿತ್ರೆಯ ಚಂಪೂ ಕಾವ್ಯ ಷಡಕ್ಷರ ಕವಿಯ “ರಾಜಶೇಖರ ವಿಳಾಸ” ಇದರಲ್ಲಿ ಬರುವ 13ನೆ ಆಶ್ವಾಸದ ತಿರುಕೊಳವಿನಾಚಿಯ ಪ್ರಸಂಗ ಈ ಕಾವ್ಯ ಕಂದ ಪದ್ಯದಲ್ಲಿದೆ. ಪ್ರಸ್ತುತ ಕಾವ್ಯಭಾಗವನ್ನು ರಾಜಶೇಖರ ವಿಳಾಸಂ'ದಿಂದ ಆರಿಸಿಕೊಳ್ಳಲಾಗಿದೆ. ಈ ಕಾವ್ಯವು ಪಂಚಾಕ್ಷರಿಯ ಮಹಿಮೆಯನ್ನು ತಿಳಿಸುವ ವಿಷಯವನ್ನೊಳಗೊಂಡಿದೆ. ಕತೆಯಲ್ಲಿ ಚೋಲಮಂಡಲಾಧಿಪತಿ ಸತ್ಯೇಂದ್ರಚೋಳ ಹಾಗು ಅಮೃತಮತಿಮಹಾದೇವಿಯರಿಗೆ ರಾಜಶೇಖರನೆಂಬ ಮಗ ಇರುತ್ತಾನೆ. ಇವನ ಸ್ನೇಹಿತ ಮಿತವಚನ ಅಂದರೆ ಮಂತ್ರಿಯ ಮಗ. ಇಬ್ಬರೂ ಸ್ನೇಹಿತರು ಆತ್ಮವೊಂದೇ ದೇಹ ಬೇರೆ ಎಂಬಂತೆ ಇರುತ್ತಾರೆ. ಸಿಂಧೂರಾಜ ಕಾಣಿಕೆಯಾಗಿ ಕುದುರೆಗಳನ್ನು ನೀಡಿರುತ್ತಾನೆ. ಅಂಥ ಕುದುರೆಗಳ ಸವಾರಿಗೆ ಹೋದ ಪ್ರಾಣ ಸ್ನೇಹಿತರಿಂದ ಅನಾಹುತವೊಂದು ಸಂಭವಿಸುತ್ತದೆ. ಮಿತವಚನನ ಕುದುರೆ ತುಳಿತಕ್ಕೆ ಸಿಕ್ಕಿ ಶಿವಭಕ್ತೆ ತಿರುಕೊಳವಿನಾಚಿಯ ಮಗ ಶಂಕರ ಸಾಯುತ್ತಾನೆ. ಆ ಮಗು ಶಂಕರ ಐದು ವರ್ಷದ ಮಗನಾಗಿರುತ್ತಾನೆ. ಏನೋ ಸದ್ದಾಗುತ್ತದೆಯಲ್ಲಾ ಎಂದು ರಸ್ತೆ ಬದಿಗೆ ಬಂದು ನಿಂತಿರುತ್ತಾನೆ ಅಮ್ಮ ನೀರಿಗೆ ಹೋಗಿರುತ್ತಾರೆ. ನೂಕುನುಗ್ಗಲಿನಲ್ಲಿ ಸಿಕ್ಕಿ ನೆಲಕ್ಕೆ ಬೀಳುತ್ತಾನೆ. ಗಾಬರಿಯಿಂದ ಕಂಗೆಟ್ಟು ದಾರಿ ತೋಚದೆ ತನ್ನ ತಾಯಿಯನ್ನು ಕರೆ ಕರೆದು ಅಳುತ್ತಾ ಇನ್ನೇನು ಎದ್ದೇಳುವಷ್ಟರಲ್ಲಿ ಮಂತ್ರಿಪುತ್ರನ ಖುರಪುಟದ ಬೀಸಿನಿಂದ ಶಂಕರನ ತಲೆ ಕತ್ತರಿಸಿ ಹೋಗುತ್ತದೆ. ರಾಜಶೇಖರ ಬಿದ್ದಿದ್ದ ಮಗುವನ್ನು ನೋಡಿ ನಿಲ್ಲಿಸುತ್ತಾನೆ. ಸ್ನೇಹಿತನಿಗೆ ತಿಳಿಸುವಷ್ಟರಲ್ಲಿ ಮಿತವಚನನ ಕುದುರೆಯ ಕಾಲಿಗೆ ಸಿಲುಕಿ ಶಂಕರನ ಕೊರಳಿನಿಂದ ರಕ್ತ ಚಿಲ್ಲನೆ ಚಿಮ್ಮುತ್ತದೆ. ಇಬ್ಬರೂ ಸ್ನೇಹಿತರು ಪ್ರಾಯಶ್ಚಿತ್ತ ಎಂಬಂತೆ ಶಿವ ಪೂಜೆಯಲ್ಲಿ ನಿರತರಾಗುತ್ತೇವೆ ಎಂದು ಹೋಗುತ್ತಾರೆ. ನೆರೆದಿದ್ದ ಜನರೆಲ್ಲಾ ಸತ್ಯೇಂದ್ರ ಚೋಳ ಬಾಲವಧೆಯನ್ನು ಸಹಿಸುವವನಲ್ಲ ಎಂದು ಮಾತನಾಡಿಕೊಳ್ಳುತ್ತಾರೆ.

ತಿರುಕೊಳವಿನಾಚಿ ಮನೆಯಲ್ಲಿ ಮಗ ಇಲ್ಲದೆ ಇರುವುದನ್ನು ನೋಡಿ “ಎಲ್ಲಿ ಹೋಗಿರಬಹುದು?”ಎಂದು ಗಾಬರಿಯಾಗಿ ಬೀದಿಯಲ್ಲಿ ಹುಡುಕುತ್ತಾ ಎಲೆ ಸುಕುಮಾರ ಶಂಕರ ಕಣ್ಣುಕಳೆಂಬ ತಾವರೆಗೆ ಚಂದಿರನಾದವನೆ, ಲಲಿತ ಮಂದಸ್ಮಿತನೇ, ಮಧುರ ಮಾತಿನವನೇ, ಇಂಪಾದ ಗೆಜ್ಜೆಯ ನೀನಾದವನ್ನು ಮಾಡುವವನೇ ಎಲ್ಲಿರುವೆ ಎಂದು ದೊಡ್ಡಧನಿಯಲ್ಲಿ ಮಗನನ್ನು ಕಾಣದೆ ಹುಡುಕಾಡಿದಳು. ರಾಜಪುತ್ರರ ಮೆರಮವಣಿ(ವೈಹಾಳಿ)ಯನ್ನು ನೋಡಲು ಹೋದನೆ, ಆನೆಗಳ ಕಾಲಿಗೆ ಸಿಲುಕಿದನೆ, ರಥದ ಚಕ್ರಕ್ಕೆ ಸಿಲುಕಿದನೇ, ಕುದುರೆಯ ಕಾಲಿಗೆ ಸಿಲುಕಿದನೇ ಅಯ್ಯೋ ಎಂದು ಕೊಳಾಡಿದಳು. ಮಧುರ ಮಾತಿನ ಚೆಲುವಿನ ಗಣಿಯಾದವನೇ ಎಂದು ಕರೆಯುತ್ತಾ ಬರುತ್ತಾಳೆ. ಇತ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ ರುಂಡ, ಮುಂಡಗಳನ್ನು ನೋಡಿದ ಜನರೆಲ್ಲಾ ಯಾರ ಮಗ ಹೀಗಾಗಿದ್ದಾನಲ್ಲ ಎಂದು ರೋಧಿಸುತ್ತಿರುವಾಗ ಜನರ ಗುಂಪನ್ನು ಸೀಳಿಕೊಂಡು ತಿರುಕೊಳವಿನಾಚಿ ಹೋಗುತ್ತಾಳೆ. ವೈಹಾಳಿಯ ದಾಳಿಗೆ ಮಗನ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ ಆಕೆಯ ಎದೆ ನುಚ್ಚುನೂರಾಗುತ್ತದೆ. ಆ ಮಗನ ಶವವನ್ನು ಕಂಡ ಕೂಡಲೆ ತಿರುಕೊಳವಿನಾಚಿ ಕಾಡ್ಗಿಚ್ಚನ್ನು ನೋಡಿದ ಜಿಂಕೆಯಂತೆ, ಹದ್ದು ಮೇಲೇರಿ ಬಂದ ಹಾವಿನಂತಾಗುತ್ತಾಳೆ. ತನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಹಾಳಾದೆ ಎಂದು ಗೋಳಿಡುತ್ತಾಳೆ. ತನ್ನ ಮಗನ ಕಳೇಬರವನ್ನು ಎತ್ತಿಕೊಂಡ ತಿರುಕೊಳವಿನಾಚಿ ಬೇರೆ ಬೇರೆಯಾಗಿದ್ದ ಮಗನ ರುಂಡ ಮುಂಡವನ್ನು ಅಂಟಿಸಿ ನೋಡುತ್ತಾಳೆ. ಯಾವ ಹೆತ್ತವರಿಗೂ ಬರಬಾರದ ಸಂಕಟ ಇದು. “ಪಸಿದೆಯೆಲೆ ಕಂದ ಬತ್ತಿತು, ಸರಿವರೆಯದ ಮಕ್ಕಳ್ ಶಂಕರನೆಲ್ಲಿ ಎಂದರೆ ಏನೆನ್ನಲಿ ಅರಸನ ಹಯಕ್ಕೆ ಆಹುತಿಯಾಗಿ ಹೋದ ಎನ್ನಲೇ? ನೀನಾಡಿದೆಡೆಗಳಂ ಸುತ ನೀನೊರಗಿದ ಪಾಸುವಂ, ನೀನುಂಡ ತಾಣವನ್ನು ಇನ್ನು ಹೇಗೆ ನೋಡಲಿ” ಎಂದು ಅರಚುತ್ತಾಳೆ ಬೀದಿಯಲ್ಲಿ ಬಿದ್ದು ಹೊರಳಾಡುತ್ತಾಳೆ.

ಎಳೆಗಿಳಿಯ ಕೊರಳನ್ನು ಮುರಿದವರಾರು, ಹಂಸದ ರೆಕ್ಕೆಯನ್ನು ಮುರಿದವರಾರು, ಜಿಂಕೆಯ ಮರಿಯ ಕುತ್ತಿಗೆ ಮುರಿದವರಾರು, ತಾವರೆಯ ದಂಟನ್ನು ಕಿತ್ತವರಾರು ಎಂದು ಕಣ್ಣಿರು ತುಂಬಿದ ಆಶ್ರುವಿನಿಂದ ಮಗನ ಮುಖದ ಮೇಲಿನ ದೂಳನ್ನು ಹೊರೆಸಿದಳು. ಈಗಾಗಲೇ ಗಂಡನನ್ನು ಮತ್ತು ಆರು ಮಕ್ಕಳನ್ನು ಕಳೆದುಕೊಂಡ ನತದೃಷ್ಠೆ. ಶಂಕರ ನೀನು ಬೆಳೆದು ದೊಡ್ಡವನಾಗಿ ಹಣವನ್ನು ಸಂಪಾದಿಸಿ ಶಿವಕೃಪೆಯನ್ನು ಪಡೆಯುವೆ ಎಂದು ತಿಳಿದಿದ್ದೆ. ನನ್ನನ್ನು ಬಿಟ್ಟು ಏಕೆ ದೂರಾದೆ ಎನ್ನುತ್ತ ಒಡಲ ಉರಿಯ ಕತ್ತಲು ಕವಿದಿದೆ, ಬಸಿರು ಕಾಂತಿಯನ್ನು ಕಳೆದುಕೊಂಡಿದೆ, ಸುಗುಣನಿಧಿಯಾದ ಮಗನೇ ಶಂಕರ ಶಿವನಿಂದ ಪಡೆದ ನಿನ್ನನ್ನು ಈ ಸ್ಥಿತಿಯಲ್ಲಿ ನೋಡಬೇಕಾಯಿತೆ. ಶಿವಶರಣರ ಪಾದದ ಧೂಳು ಸ್ಮರಿಸಬೇಕಾದ ನೀನು ಕುದುರೆಯ ಪಾದಕ್ಕೆ ಸಿಕ್ಕಿ ಹತನಾದೆಯ. ಗಿರಿಜೆಯೇ ರತಿ ಮನ್ಮಥರನ್ನು ಸೇರಿಸಿದಂತೆ ನನ್ನ ಮತ್ತು ಮಗನನ್ನು ಸೇರಿಸು ಎಂದು ಪರಿಪರಿಯಾಗಿ ದುಃಖಿಸಿದಳು. ಮುಂದೆ ರಾಜ ಸತ್ಯೇಂದ್ರ ಚೋಳನಲ್ಲಿ ತನ್ನ ನೀವೇದನೆಯನ್ನು ವ್ಯಕ್ತಪಡಿಸುವಳು. ಹೀಗೆ ರಾಜ ಹಾಗು ಮಂತ್ರಿಮಗನ ದರ್ಪಕ್ಕೆ ಇಲ್ಲಿ ಶಂಕರ ಸಾವನ್ನಪ್ಪುತ್ತಾನೆ. ಈ ಪ್ರಸಂಗವನ್ನು ಕವಿ ಕರುಣಾಜನಕವಾಗಿ ಚಿತ್ರಿಸಿದ್ದಾನೆ. ತನ್ನ ಬಾಳಿನ ಏಕಮಾತ್ರ ಆಶಾದೀಪವಾಗಿದ್ದ ಕುಮಾರನ ಆಕಸ್ಮಿಕ ಮರಣಾಘಾತವನ್ನು ಸಹಿಸದ ಮಾತೃ ಹೃದಯದ ನೈಜ ಚಿತ್ರಣವನ್ನು ಈ ಪ್ರಸಂಗದಲ್ಲಿ ಕಾಣಬಹುದು.

✍️
ಡಾ.ಬಿ.ಟಿ.ವೆಂಕಟೇಶ್
ಕನ್ನಡ ಉಪನ್ಯಾಸಕರು
ಚಿತ್ರದುರ್ಗ

Комментарии

Информация по комментариям в разработке

Похожие видео

  • ಕೆಲ ವಸ್ತುಗಳಿಗೆ - ರಂಜಾನ್ ದರ್ಗಾ॥ಹೊಕ್ಕಳಲ್ಲಿ ಹೂವಿದೆ॥ Kela Vasthugalige - Ramjan Darga
    ಕೆಲ ವಸ್ತುಗಳಿಗೆ - ರಂಜಾನ್ ದರ್ಗಾ॥ಹೊಕ್ಕಳಲ್ಲಿ ಹೂವಿದೆ॥ Kela Vasthugalige - Ramjan Darga
    1 год назад
  • ಇಂದಿನ ದೇವರು - ಕುವೆಂಪು ।Indina Devaru - Kuvempu।SEP। ಕನ್ನಡ ಅರಿವು-೧
    ಇಂದಿನ ದೇವರು - ಕುವೆಂಪು ।Indina Devaru - Kuvempu।SEP। ಕನ್ನಡ ಅರಿವು-೧
    1 год назад
  • ವೈಚಾರಿಕ ಪ್ರಜ್ಞೆಗೆ ಅಡೆತಡೆಗಳು - ಎಚ್ ನರಸಿಂಹಯ್ಯ।Vaicharika Pragnege  Adatadegalu - Hosur Narasimhaiah
    ವೈಚಾರಿಕ ಪ್ರಜ್ಞೆಗೆ ಅಡೆತಡೆಗಳು - ಎಚ್ ನರಸಿಂಹಯ್ಯ।Vaicharika Pragnege Adatadegalu - Hosur Narasimhaiah
    1 год назад
  • ಮನೆಯಲ್ಲೇ ಜೀವಾಮೃತ ಮಾಡುವುದು ಹೇಗೆ?ಗಿಡಗಳಿಗೆ ಅಮೃತ ಈ ಜೀವಾಮೃತ!ತಾರಸಿ ತೋಟ ಮತ್ತು ಕೃಷಿಗೆ ಅತ್ಯುತ್ತಮ ಗೊಬ್ಬರ
    ಮನೆಯಲ್ಲೇ ಜೀವಾಮೃತ ಮಾಡುವುದು ಹೇಗೆ?ಗಿಡಗಳಿಗೆ ಅಮೃತ ಈ ಜೀವಾಮೃತ!ತಾರಸಿ ತೋಟ ಮತ್ತು ಕೃಷಿಗೆ ಅತ್ಯುತ್ತಮ ಗೊಬ್ಬರ
    1 день назад
  • ಈತ ಲಿಂಗದೇವ ಶಿವನು ಆತ ರಂಗಧಾಮ ವಿಷ್ಣು - ಹೆಳವನಕಟ್ಟೆ ಗಿರಿಯಮ್ಮ ॥ Helavanakatte Giriyamma॥
    ಈತ ಲಿಂಗದೇವ ಶಿವನು ಆತ ರಂಗಧಾಮ ವಿಷ್ಣು - ಹೆಳವನಕಟ್ಟೆ ಗಿರಿಯಮ್ಮ ॥ Helavanakatte Giriyamma॥
    2 года назад
  • ಮಂದಿರ ಮಸೀದಿ ನನ್ನದೇ - ಕೆ.ಜಿ.ಸರೋಜಾ ನಾಗರಾಜ್ ॥SEP॥ Mandira Masjid Nannade - K.G.Saroja Nagaraj
    ಮಂದಿರ ಮಸೀದಿ ನನ್ನದೇ - ಕೆ.ಜಿ.ಸರೋಜಾ ನಾಗರಾಜ್ ॥SEP॥ Mandira Masjid Nannade - K.G.Saroja Nagaraj
    1 год назад
  • ಮೊಸರಿನ ಮಂಗಮ್ಮ...(ಕನ್ನಡ ಸಣ್ಣ ಕಥೆಗಳು)- Kannada literature for UPSC
    ಮೊಸರಿನ ಮಂಗಮ್ಮ...(ಕನ್ನಡ ಸಣ್ಣ ಕಥೆಗಳು)- Kannada literature for UPSC
    5 лет назад
  • ಸರ್ವಜ್ಞನ ವಚನಗಳು - ಸರ್ವಜ್ಞ ॥Sarvagnana Vachanagalu॥ ಜ್ಞಾನ ಮತ್ತು ದಾನದ ಮಹತ್ವ
    ಸರ್ವಜ್ಞನ ವಚನಗಳು - ಸರ್ವಜ್ಞ ॥Sarvagnana Vachanagalu॥ ಜ್ಞಾನ ಮತ್ತು ದಾನದ ಮಹತ್ವ
    9 месяцев назад
  • BUGURI - DRAMA
    BUGURI - DRAMA
    4 года назад
  • BCA 1st Sem - SEP - ಕನ್ನಡ ಅರಿವು - ೧
    BCA 1st Sem - SEP - ಕನ್ನಡ ಅರಿವು - ೧
  • ಕೀಬೋರ್ಡ್ ಬಗ್ಗೆ ಸಂಪೂರ್ಣ ಮಾಹಿತಿ  | Keyboard Sections Explained | Information in Kannada
    ಕೀಬೋರ್ಡ್ ಬಗ್ಗೆ ಸಂಪೂರ್ಣ ಮಾಹಿತಿ | Keyboard Sections Explained | Information in Kannada
    5 лет назад
  • ರಾಮಧಾನ್ಯ ಚರಿತ್ರೆ - ಕನಕದಾಸ [ರಾಗಿ ಮತ್ತು ಭತ್ತದ ನಡುವಿನ ಸಂಭಾಷಣೆ]# Ramadhanya charite - Kanaka Dasa
    ರಾಮಧಾನ್ಯ ಚರಿತ್ರೆ - ಕನಕದಾಸ [ರಾಗಿ ಮತ್ತು ಭತ್ತದ ನಡುವಿನ ಸಂಭಾಷಣೆ]# Ramadhanya charite - Kanaka Dasa
    1 год назад
  • ಕಟ್ಟುವೆವು ನಾವು - ಗೋಪಾಲಕೃಷ್ಣ ಅಡಿಗ। Kattuvevu Naavu - M Gopalkrishna adiga
    ಕಟ್ಟುವೆವು ನಾವು - ಗೋಪಾಲಕೃಷ್ಣ ಅಡಿಗ। Kattuvevu Naavu - M Gopalkrishna adiga
    1 год назад
  • ಒಡಲಾಳ: ಕಡಲೆಕಾಯಿ ಪ್ರಸಂಗ | ಲೇಖಕರು: ದೇವನೂರು ಮಹಾದೇವ
    ಒಡಲಾಳ: ಕಡಲೆಕಾಯಿ ಪ್ರಸಂಗ | ಲೇಖಕರು: ದೇವನೂರು ಮಹಾದೇವ
    3 года назад
  • ಷಡಕ್ಷರದೇವನ ರಾಜಶೇಖರ ವಿಳಾಸ | ಮೈಸೂರು ಕೃಷ್ಣಮೂರ್ತಿ | ಕನ್ನಡ ಕಾವ್ಯೋತ್ಸವ -27
    ಷಡಕ್ಷರದೇವನ ರಾಜಶೇಖರ ವಿಳಾಸ | ಮೈಸೂರು ಕೃಷ್ಣಮೂರ್ತಿ | ಕನ್ನಡ ಕಾವ್ಯೋತ್ಸವ -27
    Трансляция закончилась 5 лет назад
  • ನಮ್ಮೂರ ಬೇಟೆ -ಕೆ.ಎ ದಯಾನಂದ #ಸಣ್ಣ ಕಥೆಗಳು #ಕನ್ನಡಸಾಹಿತ್ಯ #moralstories #nammurabethe by K A Dayananda
    ನಮ್ಮೂರ ಬೇಟೆ -ಕೆ.ಎ ದಯಾನಂದ #ಸಣ್ಣ ಕಥೆಗಳು #ಕನ್ನಡಸಾಹಿತ್ಯ #moralstories #nammurabethe by K A Dayananda
    4 месяца назад
  • ಅಂತರ್‌ಜಾಲದ ಸ್ವರೂಪ, ಪರಂಪರೆ ಮತ್ತು ಪ್ರಯೋಜನ - ಡಾ.ಡಿ.ಬಿ.ನಾಯಕ॥SEP॥ಕನ್ನಡ ಅರಿವು-೧, ದಾ.ವಿ.ವಿ
    ಅಂತರ್‌ಜಾಲದ ಸ್ವರೂಪ, ಪರಂಪರೆ ಮತ್ತು ಪ್ರಯೋಜನ - ಡಾ.ಡಿ.ಬಿ.ನಾಯಕ॥SEP॥ಕನ್ನಡ ಅರಿವು-೧, ದಾ.ವಿ.ವಿ
    1 год назад
  • Pyaranige Saithan Kata | Parisarada Kategalu | K.P. Poornachandra Tejaswi |
    Pyaranige Saithan Kata | Parisarada Kategalu | K.P. Poornachandra Tejaswi |
    4 года назад
  • ಆರು ಹಿತವರು ನಿನಗೆ - ಪುರಂದರದಾಸರು।ಕೀರ್ತನೆ। Aaru Hithavaru Ninage -   Purandara Dasa
    ಆರು ಹಿತವರು ನಿನಗೆ - ಪುರಂದರದಾಸರು।ಕೀರ್ತನೆ। Aaru Hithavaru Ninage - Purandara Dasa
    8 месяцев назад
  • ಬಸವಣ್ಣನವರ ಆಯ್ದ ವಚನಗಳು # ಮಾನವೀಯತೆ - ಕನ್ನಡ ಅರಿವು-೧# Basavanna vachanagalu
    ಬಸವಣ್ಣನವರ ಆಯ್ದ ವಚನಗಳು # ಮಾನವೀಯತೆ - ಕನ್ನಡ ಅರಿವು-೧# Basavanna vachanagalu
    1 год назад
  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей video2contact@gmail.com