ಕರುನಾಡಿನ ಶಬರಿಮಲೆ: ಧರ್ಮ, ಲಿಂಗ ಜಾತಿಯ ಬೇಧ ಇಲ್ಲ ದರ್ಶನ ನೀಡುತ್ತಾನೆ ಸಿದ್ಧಾಪುರದ ಮಣಿಕಂಠ | Vijay Karnataka

Описание к видео ಕರುನಾಡಿನ ಶಬರಿಮಲೆ: ಧರ್ಮ, ಲಿಂಗ ಜಾತಿಯ ಬೇಧ ಇಲ್ಲ ದರ್ಶನ ನೀಡುತ್ತಾನೆ ಸಿದ್ಧಾಪುರದ ಮಣಿಕಂಠ | Vijay Karnataka

ಶಬರಿಮಲೆಯ ತದ್ರೂಪದಂತಿರುವ ಅಯ್ಯಪ್ಪ ಸ್ವಾಮಿಯ ದೇವಾಲಯವೊಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿದೆ. ಧರ್ಮ, ಲಿಂಗ ಭೇದವಿಲ್ಲದೆ ಮಣಿಕಂಠ ಇಲ್ಲಿಗೆ ಬರುವ ಭಕ್ತರಿಗೆ ಸದಾ ದರ್ಶನ ನೀಡುತ್ತಿದ್ದಾನೆ. ರಾಜ್ಯದಲ್ಲಿಯೇ ನಡೆಯುವ ಏಕೈಕ ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸವವು ಈ ವರ್ಷ ಜ.10ರಿಂದ ಆರಂಭಗೊಂಡಿದ್ದು, ಜ.15ರವರೆಗೆ ನಡೆಯಲಿದೆ.

ಸಿದ್ದಾಪುರ ಪಟ್ಟಣದ ಬಾಲಿಕೊಪ್ಪದಲ್ಲಿರುವ ಈ ಅಯ್ಯಪ್ಪ ಸ್ವಾಮಿ ದೇಗುಲವನ್ನ ವಿಶ್ವವಿಖ್ಯಾತ ಶಬರಿಮಲೆಯ ದೇವಸ್ಥಾನದ ತದ್ರೂಪದಂತೆ ನಿರ್ಮಿಸಲಾಗಿದೆ. ಶಬರಿಮಲೆಯ ಗರ್ಭಗುಡಿಯಂತೆ, ಅಲ್ಲಿಯ ವಾಸ್ತುಶಿಲ್ಪದ ಮಾದರಿಯಲ್ಲೇ ಇಲ್ಲಿ ದೇಗುಲ ಹಾಗೂ ಗರ್ಭಗುಡಿ ನಿರ್ಮಾಣವಾಗಿದೆ. ಶಬರಿಮಲೆಯಂತೆ 18 ಮೆಟ್ಟಿಲುಗಳನ್ನು ಹೊಂದಿರುವುದು ಈ ಕರ್ನಾಟಕದ ಕಿರು ಶಬರಿಮಲೆಯ ವೈಶಿಷ್ಟ್ಯ. ಪಂಚಲೋಹದ ಸಮಾವರ್ತನೆಯಿಂದ ಪ್ರತಿಷ್ಠಾಪಿತ ಅಯ್ಯಪ್ಪ ಸ್ವಾಮಿಯು ನೆಲ ಭಾಗದಿಂದ 150 ಮೀಟರ್ ಎತ್ತರದಲ್ಲಿ ನಿಸರ್ಗದ ನಡುವೆ ನೆಲೆನಿಂತಿದ್ದು, ತಾಲೂಕಿನವರಲ್ಲದೆ ನಾಡಿನೆಲ್ಲಡೆಯ ಭಕ್ತರ, ಪ್ರವಾಸಿಗರ ಗಮನ ಸೆಳೆಯುತ್ತಿದೆ. ಅಯ್ಯಪ್ಪ ಸ್ವಾಮಿಯ ಗರ್ಭಗುಡಿಯ ಬಲಭಾಗದಲ್ಲಿ ಗಣೇಶನ ಆಲಯ ಹಾಗೂ ಎಡಭಾಗದಲ್ಲಿ ಸುಬ್ರಹ್ಮಣ್ಯನ ಆಲಯವನ್ನೂ ನಿರ್ಮಿಸಲಾಗಿದೆ.

ಇನ್ನು ಪವಿತ್ರವಾದ 18 ಮೆಟ್ಟಿಲುಗಳನ್ನು ಅಯ್ಯಪ್ಪನ ಜಾತ್ರೆಯ ದಿನಗಳಲ್ಲಿ ಮಾತ್ರ ಹತ್ತಲು ಅವಕಾಶ ನೀಡಲಾಗುತ್ತದೆ. ಶಬರಿಮಲೆ ಅಯ್ಯಪ್ಪ ಸ್ವಾಮಿಯನ್ನು ನೋಡಲೇ ಬೇಕು ಎನ್ನುವ ಮಹಿಳೆಯರು ಹಾಗೂ ಎಲ್ಲ ವರ್ಗದ ಭಕ್ತರಿಗೂ ಅಯ್ಯಪ್ಪನ ಪ್ರತಿರೂಪದಂತಿರುವ ಸಿದ್ದಾಪುರದ ಈ ಅಯ್ಯಪ್ಪ ದೇಗುಲದ ದರ್ಶನ ಸುಲಭ ಸಾಧ್ಯವಿದೆ.

ಇನ್ನು ಶಬರಿಮಲೆಯಲ್ಲಿ ಸಂಕ್ರಾತಿಯ ಮಕರಜ್ಯೋತಿ ಪೂಜೆಯ ಸಂದರ್ಭದಲ್ಲಿ ಗರುಡ ಪಕ್ಷಿಯೊಂದು ಸುತ್ತುತ್ತಿರುವುದನ್ನು ನಾವು ಕೇಳಿರುತ್ತವೆ. ಅದರಂತೆ ಇಲ್ಲಿಯೂ ಕಳೆದ ಎರಡು ವರ್ಷಗಳಿಂದ ಜಾತ್ರಾ ಆರಂಭದ ಧ್ವಜಾರೋಹಣದ ಸಮಯದಲ್ಲಿ ಆಗಸದಲ್ಲಿ ಗರುಡ ಹಾರಾಟ ನಡೆಸುವುದು ದೇವರ ಸನ್ನಿಧಿಯಲ್ಲಿ ನಡೆಯುವ ಪವಾಡ ಎನ್ನುವಂತಾಗಿದೆ. ಇದು ಅಯ್ಯಪ್ಪ ಭಕ್ತರನ್ನು ಪುಳಕಿತರನ್ನಾಗಿಸುತ್ತಿದೆ.

#Karwar #Sabarimala

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке