Yakshagana , ಜನ್ಸಾಲೆ ಯಕ್ಷಮಿತ್ರ ಬಳಗ ಸಾದರಪಡಿಸುವ ಯಕ್ಷಗಾನ ಚಂದ್ರಾವಳಿ ವಿಲಾಸ …

Описание к видео Yakshagana , ಜನ್ಸಾಲೆ ಯಕ್ಷಮಿತ್ರ ಬಳಗ ಸಾದರಪಡಿಸುವ ಯಕ್ಷಗಾನ ಚಂದ್ರಾವಳಿ ವಿಲಾಸ …

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಅಮೃತವರ್ಷಿಣಿ ಸಭಾಂಗಣದಲ್ಲಿ ಸಮೂಹ ಉಜಿರೆ ಸಂಘಟನೆಯಲ್ಲಿ ದಿನಾಂಕ 26 8 2019 ಸೋಮವಾರ ರಾತ್ರಿ 8.00 ಗಂಟೆಗೆ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು ಪ್ರಾಯೋಜಿಸುವ ಜನ್ಸಾಲೆ ಯಕ್ಷಮಿತ್ರ ಬಳಗ ಸಾದರಪಡಿಸುವ ಯಕ್ಷಗಾನ ಚಂದ್ರಾವಳಿ ವಿಲಾಸ ವಿಜೃಂಭಣೆಯಿಂದ ಜರುಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಜನ್ಸಾಲೆ ರಾಘವೇಂದ್ರ ಆಚಾರ್ಯ, ಮದ್ದಳೆಯಲ್ಲಿ ಕಡತೋಕ ಸುನಿಲ್ ಭಂಡಾರಿ, ಚೆಂಡೆ ವಾದನದಲ್ಲಿ ಹಾಲಾಡಿ ಸುಜಕುಮಾರ್ ಭಾಗವಹಿಸಿದರು. ಮುಮ್ಮೇಳದಲ್ಲಿ ಪಾತ್ರಧಾರಿಗಳಾಗಿ ಶ್ರೀಕೃಷ್ಣನಾಗಿ ಕಾರ್ತಿಕ್ ಚಿಟ್ಟಾಣಿ, ಚಂದ್ರಾವಳಿ ಯಾಗಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಅತ್ತೆಯಾಗಿ ಹಳ್ಳಾಡಿ ಜಯರಾಮ ಶೆಟ್ಟಿ, ಚಂದ ಗೋಪನಾಗಿ ರವೀಂದ್ರ ದೇವಾಡಿಗ, ರಾಧೆಯಾಗಿ ಸುಧೀರ್ ಉಪ್ಪೂರು, ಸಖಿಯಾಗಿ ನಾಗರಾಜ ದೇವಲ್ಕುಂದ, ಗೋಪಾಲಕ ನಾಗಿ ಆದಿತ್ಯ ಭಟ್ ನಿರ್ವಹಿಸಿದರು. ಗಣ್ಯಾತಿಗಣ್ಯರಾದಿಯಾಗಿ ಸಹಸ್ರಾರು ಸಂಖ್ಯೆಯ ಪ್ರೇಕ್ಷಕರು ಸೇರಿದ್ದರು.

Комментарии

Информация по комментариям в разработке