Kiranraj interview: ದೇಹಕ್ಕೆ ಗಾಯ ಆದ್ರೆ ವಾಸಿ ಆಗತ್ತೆ ಆದ್ರೆ ಇಲ್ಲಿ ಮೆಂಟಲ್ ಟಾರ್ಚರ್ ಜಾಸ್ತಿ|Vijay Karnataka

Описание к видео Kiranraj interview: ದೇಹಕ್ಕೆ ಗಾಯ ಆದ್ರೆ ವಾಸಿ ಆಗತ್ತೆ ಆದ್ರೆ ಇಲ್ಲಿ ಮೆಂಟಲ್ ಟಾರ್ಚರ್ ಜಾಸ್ತಿ|Vijay Karnataka

ಕನ್ನಡತಿ ಧಾರಾವಾಹಿ ನಟ ಕಿರಣ್ ರಾಜ್ ಅವರು ಈಗ 'ರಾನಿ' ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇಂದು ಕಿರಣ್ ರಾಜ್ ಅವರ ಹುಟ್ಟುಹಬ್ಬದ ದಿನ 'ರಾನಿ' ಟೀಸರ್ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ರಾನಿ ಹೀರೋ ಕೂಡ ಹೌದಂತೆ, ಅಪರಾಧಿಯೂ ಹೌದಂತೆ. ಇದುವರೆಗೂ ಕಾಣಿಸಿಕೊಳ್ಳದ ಲುಕ್‌ನಲ್ಲಿ ಕಿರಣ್ ರಾಜ್ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಈ ಬಗ್ಗೆ ಕಿರಣ್ ರಾಜ್ ಅವರು 'ವಿಜಯ ಕರ್ನಾಟಕ ವೆಬ್' ಜೊತೆ ಮಾತನಾಡಿದ್ದಾರೆ.

ಪಕ್ಕಾ ಆಕ್ಷನ್ ಥ್ರಿಲ್ಲರ್ ಜಾನರ್‌ನಲ್ಲಿ ಸಿನಿಮಾ ಮೂಡಿಬಂದಿದೆ. ಸೂರ್ಯ ಕುಂದಾಪುರ, ರವಿಶಂಕರ್, ಧರ್ಮಣ್ಣ ಕಡೂರು, ಮೈಕೋ ನಾಗರಾಜ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು ಸಾಕಷ್ಟು ಕುತೂಹಲ ಸೃಷ್ಟಿಸಿದೆ. ರಾನಿ ಸಿನಿಮಾ ಎಷ್ಟು ಮುಖ್ಯ? ರಾನಿ ಸಿನಿಮಾ ಕತೆ ಏನು? ರಾನಿ ಶುರುವಾಗಿದ್ದು ಹೇಗೆ? ರಾನಿ ಸಿನಿಮಾ ಶೂಟಿಂಗ್ ವಿಧಾನ ಹೇಗೆ ನಡೆಯಿತು? ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೆ ಸಿನಿಮಾ ನಟನಾಗಿ ಇರೋದು ಎಷ್ಟು ಕಷ್ಟ? ನಟನೆ, ಉದ್ಯಮ, ಸಾಮಾಜಿಕ ಕೆಲಸಗಳನ್ನು ಕಿರಣ್ ರಾಜ್ ಅವರು ಹೇಗೆ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಾರೆ ಎಂಬ ಬಗ್ಗೆ ಕಿರಣ್ ರಾಜ್ ಅವರು ಮಾತನಾಡಿದ್ದಾರೆ.

#kiranraj #kannadathi #rani

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Our Video Website: https://kannada.timesxp.com/

Комментарии

Информация по комментариям в разработке