ಬೆಳಗಿನ ಜಾವ ಅಂದ್ರೆ ಯಾರಿಗೆ ಇಷ್ಟ ಇಲ್ಲ ..
ಸುಂದರ ಸೂರ್ಯೋದಯ
ತಂಪಾದ ಗಾಳಿ, ಪಕ್ಷಿಗಳ ಕಲರವ... ದೇಹ ಮನಸ್ಸುಗಳಿಗೆ ಹೊಸ ಚೈತನ್ಯ
ಆದರೆ, ನಮ್ಮ ವರಕವಿ ಬೇಂದ್ರೆಯವರಿಗೆ ಈ 'ಬೆಳಗು ಜಾವ' ಕೇವಲ ಪ್ರಕೃತಿಯ ದೃಶ್ಯವಲ್ಲ. ಅದು ಮನುಷ್ಯನ ಜೀವನದ ಯೌವನ.
ಈ ಕವಿತೆಯು ಯುವಕರಿಗೆ ಎಚ್ಚರಿಕೆಯ ಗಂಟೆ
ಸೋಮಾರಿತನ ಬಿಟ್ಟು ಏದ್ದೇಳಲು ನೀಡುವ ಕರೆ
ಕವಿ ಮತ್ತು ಕಾವ್ಯದ ಪರಿಚಯ
ಕವಿ: ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
ಕಾವ್ಯ ಪ್ರಕಾರ: ಸುನೀತ (Sonnet)
ಈ ಕವಿತೆಯ ರಚನೆ ತುಂಬ ವಿಶೇಷವಾಗಿದೆ. ಇದು ಇಂಗ್ಲಿಷಿನ 'ಸಾನೆಟ್' (Sonnet) ಮಾದರಿಯಲ್ಲಿದೆ. ಕನ್ನಡದಲ್ಲಿ ಇದನ್ನು *'ಸುನೀತ'* ಎನ್ನುತ್ತಾರೆ. ಇದರಲ್ಲಿ ಷೇಕ್ಸ್ಪೀರಿಯನ್ ಮಾದರಿಯಂತೆ ಮೂರು ಚೌಪದಿ ಅಂದರೆ 4 ಸಾಲುಗಳು. ಮತ್ತು ಕೊನೆಯಲ್ಲಿ ಒಂದು ದ್ವಿಪದಿ ಅಂದರೆ 2 ಸಾಲುಗಳು ಇವೆ.
---
ಮೊದಲನೇ ಭಾಗ ಪ್ರಕೃತಿಯ ಸೌಂದರ್ಯದ್ದು.
* ಕವಿತೆ ಶುರುವಾಗೋದೇ **“ಏಳು ಚಿನ್ನ!”* ಅನ್ನೋ ಪ್ರೀತಿಯ ಕರೆಯಿಂದ . ಬೆಳಗಾದಾಗ ಏನಾಗುತ್ತೆ .
ಆಕಾಶ ಕಣ್ಣು ತೆರೆಯುತ್ತೆ, ನಕ್ಷತ್ರಗಳು ಜಾರಿ ಹೋಗುತ್ತವೆ, ಕತ್ತಲೆ ಸೋತು ಹೋಗುತ್ತೆ.
ಇಲ್ಲಿ ಕವಿ ಒಂದು ಅದ್ಭುತ ಹೋಲಿಕೆ ಕೊಡ್ತಾರೆ. ಜೇನ್ನೊಣ ಹೇಗೆ ಹೂವಿನ ಕಡೆಗೆ ಬರುತ್ತೋ, ಹಾಗೆಯೇ **ಬೆಳಕು ಎಂಬ ಬೇಟೆಗಾರ ಕತ್ತಲೆಯನ್ನು ಭೇಟೆಯಾಡಲು ಬರುತ್ತಾನೆ
ಅಂದ್ರೆ, ಕತ್ತಲೆ ಎಷ್ಟೇ ದಟ್ಟವಾಗಿದ್ದರೂ, ಬೆಳಕು ಬಂದೇ ಬರುತ್ತೆ. ಹಾಗೇನೇ ನಮ್ಮ ಜೀವನದ ಕಷ್ಟಗಳು ಕೂಡ ಶಾಶ್ವತವಲ್ಲ, ಸುಖದ ಬೆಳಕು ಬಂದೇ ಬರುತ್ತೆ ಅನ್ನೋದು ಇಲ್ಲಿನ ಗೂಢವಾದ ಅರ್ಥ .
ಎರಡನೇ ಮತ್ತು ಮೂರನೇ ಭಾಗದಲ್ಲಿಭಾಗದಲ್ಲಿ
ಯುವಕರಿಗೆ ಎಚ್ಚರಿಕೆಯ ಕರೆ ನೀಡುತ್ತಾರೆ.
**"ಹುಸಿನಿದ್ದೆಗಿದ್ದೆ ಸಾಕು!"**ಎನ್ನುತ್ತಾರೆ
ಕವಿತೆಯ ಮುಖ್ಯ ಭಾಗದಲ್ಲಿ. ಕವಿ ಹೇಳ್ತಾರೆ:
*“ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು!”*
ವಿದ್ಯಾರ್ಥಿಗಳೇ, ಸುಮ್ಮನೆ ನಿದ್ದೆ ಮಾಡಿ ಅಥವಾ ಸೋಮಾರಿಗಳಾಗಿ ಕಾಲ ಕಳೆಯಬೇಡಿ. ಜೀವನ ಅನ್ನೋದು ತುಂಬಾ ಚಿಕ್ಕದು. ಬದುಕಿರುವ ತನಕ ಜೀವನದ ಪ್ರತಿ ಕ್ಷಣವನ್ನು, ರಸವನ್ನು ಹೀರಬೇಕು.
ಅಂಗಡಿಯ ಬಾಗಿಲು ತೆರೆಯುವ ಹಾಗೆ, ಜೀವನ ನಮಗೆ ಅವಕಾಶಗಳನ್ನು ಕೊಡ್ತಾ ಇರುತ್ತೆ. ಕೋಳಿ ಕೂಗಿದ ತಕ್ಷಣ, ಅಂದ್ರೆ ಸರಿಯಾದ ಸಮಯಕ್ಕೆ ಎದ್ದು ಆ ಅವಕಾಶಗಳನ್ನು ಬಾಚಿಕೊಳ್ಳಬೇಕು
ಯೌವನ ಮತ್ತು ಸಮಯದ ಮಹತ್ವ ಹೇಳುವ
** ಕವಿತೆಯ ಕೊನೆಯ ಭಾಗಕ್ಕೆ ಬರೋಣ
ಬೇಂದ್ರೆಯವರು ಒಂದು ಶಾಕಿಂಗ್ ಸತ್ಯ ಹೇಳ್ತಾರೆ.
ಪ್ರಕೃತಿಯಲ್ಲಿ ಮಳೆ ಬರುತ್ತೆ, ಹೋದ ಸುಗ್ಗಿ ಮತ್ತೆ ಬರುತ್ತೆ, ಒಣಗಿದ ಮರ ಮತ್ತೆ ಚಿಗುರುತ್ತೆ. ಆದರೆ..
ಜೀವನದ ನದಿ ಹರಿಯುತ್ತಲೇ ಇರುತ್ತೆ. ಮರಣ ಯಾವಾಗ ಬೇಕಾದರೂ ಬರಬಹುದು. ಒಮ್ಮೆ ಕಾಲ ಕಳೆದು ಹೋದರೆ, ಅದು ಮತ್ತೆ ವಾಪಸ್ ಬರೋದಿಲ್ಲ .
ಅದಕ್ಕೆ ಕವಿ ಹೇಳ್ತಾರೆ - ಮುಪ್ಪಿನ ಚಿಂತೆ ಈಗಲೇ ಯಾಕೆ? ನೀನು ಯುವಕನಿದ್ದೀಯ, ಶಕ್ತಿ ಇದೆ. ಈ ಸಮಯವನ್ನ ಹಾಳು ಮಾಡದೆ ಸಾಧನೆ ಮಾಡು! .
ಈ ಪದ್ಯದ ಸಾರಾಂಶ ಇಷ್ಟೇ:
1. *ಬೆಳಗು ಜಾವ ಅಂದರೆ ಇಲ್ಲಿ ಯೌವನ.* ಇದು ಬದುಕಿಗೆ ಶಕ್ತಿ ತುಂಬುವ ಸಮಯ
2. ಈ ಸಮಯ ಮತ್ತು ಅವಕಾಶ ಯಾರಿಗೂ ಕಾಯಲ್ಲ. ಸಿಕ್ಕಾಗ ಬಳಸಿಕೊಳ್ಳಿ.
3. ಪ್ರಕೃತಿ ಮತ್ತೆ ಚಿಗುರಬಹುದು, ಆದರೆ ನಮ್ಮ ಯೌವನ ಮತ್ತೆ ಬರೋದಿಲ್ಲ. ಹಾಗಾಗಿ ಈಗಲೇ ಎದ್ದು ಸಾಧನೆ ಮಾಡಿ!
ಹೀಗೆ,
ದ.ರಾ. ಬೇಂದ್ರೆಯವರ 'ಬೆಳಗು ಜಾವ' ಕವಿತೆಯು ಯುವಕರಿಗೆ ಸೋಮಾರಿತನ ಬಿಟ್ಟು ಎದ್ದೇಳಲು ನೀಡುವ ಕರೆ. ಜೀವನದ ಅಮೂಲ್ಯ ಸಮಯ ಮತ್ತು ಯೌವನದ ಮಹತ್ವವನ್ನು ಈ ಕವಿತೆಯಲ್ಲಿ ಸಾರಿದ್ದಾರೆ.
1.ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ ಜೇನ್ನೊಣದ ಹೆದೆಗೆ, ಹೂಬಾಣ ಹೂಡಿ, ಝುಂ ಎಂದು ಬಿಟ್ಟ ಮಾರ ಗುಡಿಗೋಪುರಕ್ಕು, ಬಲೆ ಬೀಸಿ ಬಂದ, ಅಗೊ ಬೆಳಕು-ಬೇಟೆಗಾರ.
2.ನಿಶೆಯಿಳಿದ ಉಷೆಯ, ಎಳನಗೆಯ ಬಗೆಗೆ, ಸೋತಿರಲು ಜಗವು ಸವಿಗೆ ಕಣ್ಣಿದಿರು ಒಂದು, ಕಟ್ಟಿತ್ತು ಕನಸು; ಕೂಗೊಂದು ಬಂತು ಕಿವಿಗೆ. ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು ಈ ತುಂಬಿಬಾಳು, ತುಂಬಿರುವ ತನಕ, ತುಂತುಂಬಿ ಕುಡಿಯಬೇಕು.
3.ಯಾವಾಗೊ ಕೋಳಿ ಕೂಗಿಹುದು ಏಳಿ, ತಡವೇಕೆ ಪಾನಕೇಳಿ ಮೊದಲಾಗಲೀಗ, ಅಂಗಡಿಯ ಕದವ ಈ ಕ್ಷಣಕೆ ತೆರೆಯ ಹೇಳಿ ಜೀವನದ ನದಿಗೆ ಸೆಳವಿಹುದು, ಮರಣ ಬಂದೀತು ಕ್ಷಣವು ಉರುಳಿ ಹೋದವರು ತಿರಗಿ ಬಂದಾರೆ, ಅವರು ಬರಲಿಕ್ಕು ಇಲ್ಲ ಮರಳಿ.
4.ಬಾನ್ ಹೊಗರಲುಂಟು, ಮರ ಚಿಗುರಲುಂಟು, ಬರಲುಂಟೆ ಸುಗ್ಗಿ ಮತ್ತೆ? ಮುಳುಗಿರಲಿ ಮುಪ್ಪು ಚಿಂತನದಿ, ತಾನು ಹರೆಯಕ್ಕೆ ಬೇರೆ ಹೊತ್ತೆ?
#kannadaliterature #love #kavanagalu #kannadapoetry #bendre #2ndpuc #puc #motivation #2ndpuckarnataka #youth #lifelessons #lifequotes #life
Информация по комментариям в разработке