Manasi sudhir - ಶ್ರೀ ಬನ್ನಂಜೆ ಗೋವಿಂದಾಚಾರ್ಯ - ಒಂದು ಅಂದರೆ ಒಂದು - Ondu andare ondu

Описание к видео Manasi sudhir - ಶ್ರೀ ಬನ್ನಂಜೆ ಗೋವಿಂದಾಚಾರ್ಯ - ಒಂದು ಅಂದರೆ ಒಂದು - Ondu andare ondu

ಉಡುಪಿಯಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರ. ಇದೇ ಶುಭ ಸಂದರ್ಭದಲ್ಲಿ ನಾನು ವಿದ್ಯಾ ವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯ ಅವರು ಬರೆದ ಕೃಷ್ಣನ ಕುರಿತ ವಿಶಿಷ್ಟ ಕವಿತೆಯನ್ನು ಶ್ರೀ ಗುರುರಾಜ ಮಾರ್ಪಳ್ಳಿಯವರ ಸಂಗೀತ ಸಂಯೋಜನೆಯಲ್ಲಿ ಪ್ರಸ್ತುತ ಪಡಿಸಿದ್ದೇನೆ.
"Dodda makkala Kavana" written by Vidyavachaspati Shri Bannanje Govindacharya' , music composed by Sri Gururaj Marpalli
©copyright reserved

ಒಂದು ಅಂದರೆ ಒಂದು
ಮದುವೆ ದಿಬ್ಬಣ ಬಂದು
ಸೇರಿತು ಸೆರೆಮನೆ ಸಂದು

ಒಂದು ಒಂದು ಎರಡು
ಕಾವಲು ಕಣ್ಣು ಕುರುಡು
ಗೊಲ್ಲರ ಕೇರಿಗೆ ಹೊರಡು

ಎರಡು ಒಂದು ಮೂರು
ಪೂತನಿ ಮೊಲೆಯ ಹೀರು
ಗಾಡಿ ಚಂಪಾಂಚೂರು

ಮೂರು ಒಂದು ನಾಕು
ಗಡಿಗೆ ಬೆಣ್ಣೆ ಬೇಕು
ಮಣ್ಣು ಮುಕ್ಕುವ ಜೋಕು

ನಾಕು ಒಂದು ಐದು
ಜಿಡ್ಡೆಗೆ ಬಿಗಿದಳು ಬೈದು
ಜೋಡಿ ಮರಗಳು ಕೈದು

ಐದು ಒಂದು ಆರು
ಕಾಳಿಯ. ಮಡುವಿಗೆ ಹಾರು
ಬೆಂಕಿಯಿಂದ ಪಾರು

ಆರು ಒಂದು ಏಳು
ಕೊಳಲ ಹಾಡು ಕೇಳು
ಇರುಳು ನಿದ್ದೆ ಹಾಳು

ಏಳು ಒಂದು ಎಂಟು
ಗೊಲ್ಲರ ಹುಡುಗಿಯ ನಂಟು
ಕದ್ದ ಸೀರೆಯ ಗಂಟು

ಎಂಟು ಒಂದು ಒಂಭತ್ತು
ನಾಡಿನ ಗಾಡಿ ಬಂತು
ಕಾಡಿಗೆ ಕಂಬನಿ ತಂತು

ಒಂಭತ್ತೊಂದು ಹತ್ತು
ದಾಡೆ ಮುರಿದು ಬಿತ್ತು
ಕಂಸನ ಕೊರಳಿಗೆ ಕುತ್ತು
- ಬನ್ನಂಜೆ ಗೋವಿಂದಾಚಾರ್ಯ.

Follow me on instagram
  / manasi_sudhir  

Follow me on facebook
  / bhaavageethabhinaya  

Follow me on YouTube
   / @manasisudhir  

Комментарии

Информация по комментариям в разработке