| ಭಜಿಸದೆ ಕೆಡಬೇಡ ಹುಚ್ಚು ಮನವೆ ನೀ | ಭಜಿಸು ಶ್ರೀ ಸತ್ಯಾತ್ಮತೀರ್ಥ ಗುರುಗಳ ||

Описание к видео | ಭಜಿಸದೆ ಕೆಡಬೇಡ ಹುಚ್ಚು ಮನವೆ ನೀ | ಭಜಿಸು ಶ್ರೀ ಸತ್ಯಾತ್ಮತೀರ್ಥ ಗುರುಗಳ ||

|| ಶ್ರೀಗುರುಭ್ಯೋ ನಮಃ ||


ಭಜಿಸದೆ ಕೆಡಬೇಡ ಹುಚ್ಚು ಮನವೆ ಭಜಿಸು ಸತ್ಯಾತ್ಮ ಗುರುಗಳಾ ||
ಕುಜನ ಮತವಳಿದ ಜಯರಾಯರ ಮೂಲವೃಂದಾವನದಿ ಮಂಗಳ ಮಾಡುತ ಪೂರ್ಣಪ್ರಜ್ಞರ ಮಹಿಮೆಯ ಭಜಿಪರ ||

ಚಿಕ್ಕಂದಿನಿಂದಲೆ ರಕ್ಕಸವೈರಿ ಶ್ರೀಕಾಂತನ ಭಜಿಸಿದಮನದವರು
ಚೊಕ್ಕಾಗಿ ಶಾಸ್ತ್ರದ ಜ್ಞಾನದ ಸಾಗರ ಉಕ್ಕಿ ಹರಿಯಿತು ಗುರುಕುಲದಿ
ಸತ್ಕುಲ ಸಾರಥಿಯಾಗಲು ಮನಮಾಡಿ ಮನಪುಂಡಿ ಕಡೆಗೆ ನಡೆಯುತಲಿ
ದೀಕ್ಷೆಯಿಂದಲಿ ಪ್ರಮೊದರಿಂದ ದೀಕ್ಷೆಯ ಪಡೆದ ಗುರುಗಳ ||

ಸರ್ವಜ್ಞ ಪೀಠದಿ ಪವನನ ಮಹಿಮೆಯ ಸಾರುವ ಬಾಲಯತಿಗಳು
ಸರ್ವ ಸಜ್ಜನಕೆ ಅಭಿನವ ರಘೂತ್ತಮರಂತೆ ಕಂಡ ಪ್ರಚಂಡರು
ರವಿಚಂದ್ರರಂತೀಹ ನ್ಯಾಯಸುಧೆ ಕೊಟ್ಟ ದೇವೇಂದ್ರಸುತರ ಭಜಿಸುತಲೀ
ಭುವಿಯಲ್ಲಿ ಬುಧರ ಕೊಳಕನ್ನು ಕಳೆದು ಬೆಳಕು ನೀಡುವ ಪ್ರಭುಗಳ ||

ಸುಮೇಧರಿವರು ಸುಧೆಯ ಪದಗಳ ಸುಧೆಯನುಣಿಸುವ ಧಣಿಗಳು
ಈ ಮೆದಿನಿಲಿ ಕಾಮನ ಅರಿದ ಹೃಷಿಕೇಶರೆಂದರೆ ತಪ್ಪಾಗದು
ಧಮನಿ ಧಮನಿಯಲ್ಲಿ ವ್ಯಾಸರಾಯ ವಿದ್ಯಾಧೀಶ ರಾಘವೇಂದ್ರ ಮುಂತಾದ
ನಮ್ಮ ಗುರುವೃಂದವ ಹೊಂದಿ ಕೇಶವನ ಭಜಿಸುವ ಪುರುಷೊತ್ತಮರನ್ನ ||

ಶ್ರೀಹರಿಯ ರೂಪದ ನರಹರಿಯ ನಾಮದ ಯಜ್ಞ ಮಾಡಿದ ಪ್ರಲ್ಹಾದರು
ಆಹ್ಲಾದದಿಂದಲಿ ಈ ರೀತಿ ಭಜಿಸಿರೊ ಸಂತುಷ್ಟನಾಗುವ ಪ್ರಭಂಜನ
ಬಹಳ ಕಾಲವು ಬಿಡದೆ ಹಸುಳೆಯು ತಾಯಲ್ಲೆ ಹೊಗಿ ಇರುವಂತೆ
ಇಹಲೊಕದಲ್ಲಿ ಪೂರ್ಣಪ್ರಜ್ಞರ ಶಾಸ್ತ್ರ ಬಿಟ್ಟಿರದ ಮುನಿಗಳ ||

ಆನಂದತೀರ್ಥರ ಪೊಂದಿ ಭಜಿಪರ ಪಾದಕ್ಕೆ ಸಂದಲಿ ನಮನಗಳು
ಕೊನೆ ತನಕ ಮನಕೆ ಶಾಸ್ತ್ರದ ಪಾಕದ ಮಕರಂದ ನೀಡಲಿ ನಮಗೆಂದು
ಜಾಣ ಭಾರತೀರಮಣನ ಅರುಹುವ ಅಭಿನವ ಸತ್ಯಧರ್ಮರಿವರು
ಜ್ಞಾನವಿಠ್ಠಲನಲ್ಲಿ ಮನವಿಟ್ಟು ನಮ್ಮ ಮನದ ಕೊಳೆಯಲ್ಲ ಕಳೆಯುವರ ||

- ಸುಮಂತ ಶ್ರೀ ಮನ್ನಾರಿ.


ರಾಗ ಸಂಯೋಜನೆ
ವಾದಿರಾಜ ಕಾಖಂಡಕಿ

ಗಾಯನ
ವೇಣುಗೋಪಾಲ ಕೆ

ತಬಲಾ
ಶ್ರೀವತ್ಸ ಕೌಲಗಿ

ಕೊಳಲು
ದತ್ತಾತ್ರೇಯ ದೇಸಾಯಿ

ತಾಳ
ಶ್ರೀನಿವಾಸ ಕುಲಕರ್ಣಿ

ಹಿನ್ನೆಲೆ ಸಂಗೀತ
Bharadhwaj

ಸ್ಟುಡಿಯೋ :
ಪ್ರವೀಣ್ ಮಂಕಣಿ, VM ರೆಕಾರ್ಡಿಂಗ

Bhajisade kedabeda hucchu manave
.
.
Website- https://www.uttaradimath.org
Facebook-   / uttaradimath  
Instagram-   / sri_uttaradimath  
Youtube-    / samskrutivahini  

Комментарии

Информация по комментариям в разработке